Srujana, Science and Arts Exhibition 2023-24 in RVK – Dharwad

Neeralakatti, Dharwad, Mar 17 : Srujana, Science and Arts Exhibition 2023-24 for the children of Dharwad Schools was organised herein Rashtrotthana Vidya Kendra. Sri Bhadrakonda, a Progressive Creative Farmer, inaugurated the program and Sri Basavanagowda B, Convener of Rashtrotthana State Board Schools, presided over.

ನೀರಲಕಟ್ಟಿ ಧಾರವಾಡ, ಮಾರ್ಚ್ 17: ಧಾರವಾಡ ಜಿಲ್ಲೆಯ ಶಾಲಾ ಮಕ್ಕಳಿಗೆ ಇಲ್ಲಿನ ರಾಷ್ಟ್ರೋತ್ಥಾನ ವಿದ್ಯಾಕೇಂದ್ರದಲ್ಲಿ 2023-24ನೇ ಸಾಲಿನ ವಿಜ್ಞಾನ ಮತ್ತು ಕಲಾ ವಸ್ತುಪ್ರದರ್ಶನ, ಸೃಜನ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಪ್ರಗತಿಪರ ಸೃಜನಶೀಲ ಕೃಷಿಕರಾದ ಶ್ರೀ ಭದ್ರಗೊಂಡ ಇವರು ಉದ್ಘಾಟಕರಾಗಿ ಆಗಮಿಸಿದ್ದರು. ರಾಷ್ಟ್ರೋತ್ಥಾನ ಪರಿಷತ್‍ ಸ್ಟೇಟ್ ಬೋರ್ಡ್ ಶಾಲೆಗಳ ಸಂಚಾಲಕರಾದ ಶ್ರೀ ಬಸನಗೌಡ ಬಿ ಇವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಧಾರವಾಡ ಜಿಲ್ಲೆಯ ಶಾಲಾ ಮಕ್ಕಳಿಗಾಗಿ ಭಾಷಣ ಹಾಗೂ ವಿಜ್ಞಾನ ವಸ್ತುಪ್ರದರ್ಶನ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು. ಸಂಜೆ ಸಮಾರೋಪದಲ್ಲಿ ರಾಷ್ಟ್ರೋತ್ಥಾನ ಪರಿಷತ್‍ನ ಸದಸ್ಯರಾದ ಶ್ರೀ ಅಶೋಕ ಸೋನಕರ ಹಾಗೂ ಶಾಲೆಯ ಕಾರ್ಯದರ್ಶಿಗಳಾದ ಶ್ರೀ ರಾಘವೇಂದ್ರ ಅಂಬೇಕರ ಇವರು ಸ್ಪರ್ಧೆಯಲ್ಲಿ ವಿಜೇತರಾದ ಮಕ್ಕಳಿಗೆ ಬಹುಮಾನವನ್ನು ವಿತರಿಸಿ, ಅಭಿನಂದಿಸಿದರು. ಕಾರ್ಯಕ್ರಮದಲ್ಲಿ ಶಾಲೆಯ ಪ್ರಾಚಾರ್ಯರಾದ ಡಾ. ಅನಿತಾ ರೈ, ಆಡಳಿತಾಧಿಕಾರಿಗಳಾದ ಶ್ರೀ ಕುಮಾರಸ್ವಾಮಿ ಕುಲಕರ್ಣಿ ಉಪಸ್ಥಿತರಿದ್ದರು.

Scroll to Top