Teacher’s Training Workshop @ RVK – Dharwad

Neeralakatti, Dharwad, Dec 23: Teacher’s Training Workshop was organised herein Rashtrotthana Vidya Kendra. Dr. Sriram Bhat took session on Sacchidananda Marga and Sri Vinayaka Bhat elaborated on Panchamukhi Shikshana.

ನೀರಲಕಟ್ಟಿ, ಧಾರವಾಡ, ಡಿಸೆಂಬರ್ 23: ರಾಷ್ಟ್ರೋತ್ಥಾನ ವಿದ್ಯಾ ಕೇಂದ್ರದಲ್ಲಿ ಶಿಕ್ಷಕರ ತರಬೇತಿ ಕಾರ್ಯಾಗಾರವನ್ನು ಆಯೋಜಿಸಲಾಗಿತ್ತು.
ಸಂಸ್ಕೃತ ವಿದ್ವಾಂಸರಾದ ಡಾ. ಶ್ರೀರಾಮ ಭಟ್ ಅವರು ಕಾರ್ಯಗಾರವನ್ನು ಉದ್ಘಾಟಿಸಿ, 1ನೇ ಅವಧಿಯಲ್ಲಿ ಸಚ್ಚಿದಾನಂದ ಮಾರ್ಗದ ಕುರಿತು ಉಪನ್ಯಾಸ ನೀಡಿದರು. 2ನೇ ಅವಧಿಯಲ್ಲಿ ಶ್ರೀ ವಿನಾಯಕ ಭಟ್ ಅವರು ಪಂಚಮುಖಿ ಶಿಕ್ಷಣದ ಅನುಷ್ಠಾನ ಈ ವಿಷಯದ ಕುರಿತು ತಮ್ಮ ಅನುಭವವನ್ನು ಹಂಚಿಕೊಂಡರು. 3ನೇ ಅವಧಿಯಲ್ಲಿ ವಿಷಯವಾರು ಶಿಕ್ಷಕರ ಗುಂಪು ಚರ್ಚೆ ನಡೆಯಿತು.
ತರಬೇತಿಯಲ್ಲಿ ಶಾಲೆಯ ಉಪ ಪ್ರಾಚಾರ್ಯರಾದ ಶ್ರೀ ಕೃಷ್ಣ ಜೋಶಿ, ಆಡಳಿತಾಧಿಕಾರಿಗಳಾದ ಶ್ರೀ ಕುಮಾರಸ್ವಾಮಿ ಕುಲಕರ್ಣಿ ಇವರು ಉಪಸ್ಥಿತರಿದ್ದರು.

Scroll to Top